
19th September 2025
ಬೆಂಗಳೂರು: ಸಮಾಜವನ್ನು ಭಾಗ ಮಾಡಲು ನಾವು ಸಿದ್ಧರಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಜಾತಿ ಗಣತಿ ಗೊಂದಲ ಸಂಬಂಧ ಸಚಿವರುಗಳ ಜೊತೆ ತುರ್ತು ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಸಾರ್ವಜನಿಕರ ಅಭಿಪ್ರಾಯವನ್ನು ಏನಿದೆ ಎಂಬ ನಮ್ಮ ಸಲಹೆಗಳನ್ನು ನೀಡಿದ್ದೇವೆ. ಯಾರನ್ನೂ ಭಾಗ ಮಾಡಲು ಇಷ್ಟ ಇಲ್ಲ. ಯಾರನ್ನೂ ಒಡೆಯುವ ಕೆಲಸ ಮಾಡುವುದಿಲ್ಲ. ಯಾರೂ ಗಾಬರಿ ಮಾಡುವ ಅಗತ್ಯ ಇಲ್ಲ. ನಮ್ಮ ಅಭಿಪ್ರಾಯವನ್ನು ಸಿಎಂಗೆ ತಿಳಿಸುತ್ತೇವೆ ಎಂದರು.
ವಿಧಾನಸೌಧದಲ್ಲಿ ನಡೆದ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಭೆಯಲ್ಲಿ ಸಚಿವರಾದ ಹೆಚ್.ಕೆ.ಪಾಟೀಲ್, ಶಿವರಾಜ್ ತಂಗಡಗಿ, ಬೈರತಿ ಸುರೇಶ್, ಈಶ್ವರ್ ಖಂಡ್ರೆ, ದಿನೇಶ್ ಗುಂಡೂರಾವ್, ಸಂತೋಷ್ ಲಾಡ್, ಕೆ.ಹೆಚ್.ಮುನಿಯಪ್ಪ ಭಾಗಿಯಾಗಿದ್ದರು. ಜೊತೆಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಪಾಲ್ಗೊಂಡಿದ್ದರು.
ಸಮೀಕ್ಷೆ ಮುಂದೂಡಿಕೆಗೆ ಸಭೆಯಲ್ಲಿ ಆಗ್ರಹ: ಸಭೆಯಲ್ಲಿ ಜಾತಿ ಪಟ್ಟಿಯಲ್ಲಿ 331 ಜಾತಿ ಕಾಲಂ ಸೇರ್ಪಡೆ ಬಗ್ಗೆ ಆಯೋಗದ ಅಧ್ಯಕ್ಷರಿಂದ ಸ್ಪಷ್ಟನೆ ಕೇಳಿದರು. ಈ ರೀತಿ ಜಾತಿಗಳನ್ನು ಸೃಷ್ಟಿ ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಜಾತಿ ಒಡೆದಂತಾಗುತ್ತದೆ. ಇದು ಸಮಾಜದಲ್ಲಿ ಗೊಂದಲಕ್ಕೆ ಕಾರಣವಾಗಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ, ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್, ಈ ಹಿಂದಿನ ಸಮೀಕ್ಷೆಗಳಲ್ಲಿ ಸಾರ್ವಜನಿಕರು ಹೇಳಿದ ಜಾತಿಯನ್ನೇ ನಾವು ಜಾತಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದೇವೆ. ಹೊಸದಾಗಿ ನಾವು ಯಾವುದೇ ಜಾತಿಗಳನ್ನು ಸೇರ್ಪಡೆ ಮಾಡಿಲ್ಲ. ಈ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ, ಬಹುತೇಕ ಸಚಿವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಗೊಂದಲದಲ್ಲಿ ಸಮೀಕ್ಷೆ ನಡೆಸುವುದು ಸರಿಯಲ್ಲ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮುಂದೂಡುವ ಬಗ್ಗೆ ಬಹುತೇಕ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ರೀತಿ ಇದ್ದರೆ ಸಮೀಕ್ಷೆ ಮುಂದೂಡುವ ಸಾಧ್ಯತೆ: ಸಭೆ ಬಳಿಕ ಮಾತನಾಡಿದ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್, ಈಗ ನಾನು ಯಾವುದೇ ರಿಪ್ಲೇ ಕೊಡುವ ಪರಿಸ್ಥಿತಿಯಲ್ಲಿ ಇಲ್ಲ. ದಯವಿಟ್ಟು ಕೇಳಬೇಡಿ. ನಾವು ಇನ್ನು ಏನು ತೀರ್ಮಾನ ತೆಗೆದುಕೊಂಡಿಲ್ಲ. ಅವರ ಕಾಳಜಿ ಏನು ಅಂತ ಕೇಳಿದ್ದೇವೆ. ಮತ್ತೆ ಮೀಟಿಂಗ್ ಮುಂದುವರೆಯಲಿದೆ. ಯಾವುದಾದರು ತೀರ್ಮಾನಕ್ಕೆ ಬಂದ್ರೆ ಅದು ಎಫೆಕ್ಟ್ ಆಗುತ್ತದೆ. ನಾನು ಈಗ ಹೇಳೋಕೆ ಆಗಲ್ಲ. ಮಾಡಲೇಬೇಕು ಹತ್ತು ವರ್ಷ ನಂತರ ಮಾಡಿ ಅಂತ ತಲೆಗೆ ಬಂದ್ರೆ ಮಾಡ್ತೇವೆ. ನಾನು ಈಗ ಅದರ ಬಗ್ಗೆ ಚರ್ಚೆ ಮಾಡಲ್ಲ. ಇವತ್ತಿನ ಬೆಳವಣಿಗೆ ಪ್ರಕಾರ ಮುಂದೆ ಹೋಗುತ್ತದೆ. ಏನು ಚೇಂಜಸ್ ಮಾಡಬೇಕು ಅಂತ ತೀರ್ಮಾನ ಮಾಡ್ತೇವೆ ಎಂದರು.
ದಲಿತ ಮುಖಂಡ ಹಾಗೂ ಕೆಪಿಸಿಸಿ ಸದಸ್ಯ ಗಾಳೆಪ್ಪ ಹಿರೇಮನಿಗೆ- ಠಾಣೆಯಲ್ಲೆ ಹಲ್ಲೆ: ದಲಿತ ಮುಖಂಡರ ಪ್ರತಿಭಟನೆ- ರಾತ್ರೋ ರಾತ್ರಿ ಕುಕನೂರ ಪಿಎಸ್ಐ ಗುರುರಾಜ ಅಮಾನತ್
ನಾಳೆ ಕುಷ್ಟಗಿಯಲ್ಲಿ ನಡೆಯಲಿರುವ ಯುವ ಸಮ್ಮೇಳನ ಹಾಗೂ ಕೊಪ್ಪಳ ಜಿಲ್ಲಾ ಕಾರ್ಯಕಾರಣಿ ಸಭೆ.
ಗಂಗಾವತಿಯಲ್ಲಿ ಯುವಕನ ಭೀಕರ ಕೊಲೆ- ಬಿಜೆಪಿ ಯುವ ಮೋರ್ಚಾ ನಗರ ಅಧ್ಯಕ್ಷ ಕೆ.ವೆಂಕಟೇಶನನ್ನು ಕೊಚ್ಚಿ ಕೊಲೆ ಮಾಡಿದ ದುಷ್ಜರ್ಮಿಗಳು
ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ಸಚಿವ, ಸಂಸದ, ಶಾಸಕರು ಮೋಸಗಾರರು- ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬಾಂಬ್: ಆಡಿಯೋ ಸಂದೇ- ಹಿಟ್ನಾಳ್ ಕುಟುಂಬ, ತಂಗಡಗಿ ಮತ್ತು ರಾಯರೆಡ್ಡಿ ವಿರುದ್ಧ ಗರ್ಂ
ಎಲ್ಲಾಲಿಂಗ ಕೊಲೆ ಪ್ರಕರಣದ ಆರೋಪಿಗಳಿಗೆ ಖುಲಾಸೆ ಹುಲಿಹೈದರ ಹನುಮೇಶ ನಾಯಕ ಸೇರಿ 9 ಜನರು ನಿರ್ದೋಷಿ: ಜಿಲ್ಲಾ ನ್ಯಾಯಾಧದೀಶರ ಆದೇಶ